ಗಾದೆಗಳು ಜೀವನದಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗಸೂಚಿಗಳಾಗಿವೆ.
ಗಾದೆ ಎನ್ನುವುದು ಹೇಳಿಕೆಯ
ರೂಪದಲ್ಲಿ ದಿನಬಳಕೆಯಾಗುವ ಮಾತುಗಳು. ನಾವು ಕನ್ನಡದ ಜನಪ್ರಿಯ ಗಾದೆ ಮಾತುಗಳು ಪಟ್ಟಿ
ಮಾಡಿದ್ದೇವೆ. ಗಾದೆ
ಮಾತುಗಳನ್ನು ದಿನನಿತ್ಯದ ಮಾತುಗಳಲ್ಲಿ ಬಳಕೆ ಮಾಡುತ್ತಲೇ ಇರುತ್ತೇವೆ.
ಗಾದೆಗಳು ವೇದಗಳಿಗೆ ಸಮಾನ ಎನ್ನುವ ನಂಬಿಕೆ ಇದೆ. ಹಾಗೆ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತು
ಪ್ರಸಿದ್ಧವಾಗಿದೆ.
ಈ ಮಾತಿನಿಂದ ಜನರು ಕನ್ನಡ ಜನಪ್ರಿಯ ಗಾದೆಗಳು ಮತ್ತು ಅವುಗಳ ಮಹತ್ವವನ್ನು ಅರಿತು ತಮ್ಮ
ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು, ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಜನರು ಮಾಡುವ ಕೆಲಸಗಳು, ಅವರ ನಡವಳಿಕೆ ಮತ್ತು ಅವರ ಕಾರ್ಯಗಳನ್ನು ಸೂಚಿಸುತ್ತದೆ.ಕ್ರಿಯೆಗಳು ಹೆಚ್ಚು ಮಹತ್ವದ
ಪರಿಣಾಮವನ್ನು ಬೀರುತ್ತವೆ ಅಥವಾ ಕೇವಲ ಪದಗಳಿಗಿಂತ ಬಲವಾದ ಸಂದೇಶವನ್ನು ರವಾನಿಸುತ್ತವೆ ಎಂದು ಸೂಚಿಸುತ್ತದೆ.
ಆಡು ಭಾಷೆಯಲ್ಲಿ ಗಾದೆ ಮಾತುಗಳು ಕಠಿಣ ಎನಿಸಿದರೂ ನಮ್ಮ ಜೀವನ ಶೈಲಿಯನ್ನು ಹೋಲುತ್ತದೆ.
ನಾವು ಮಾಡುವ ಪ್ರತಿಯೊಂದು
ಕಾರ್ಯಗಳಲ್ಲೂ ಗಾದೆಗಳು ಆವರಿಸಿಕೊಂಡಿದೆ. ಹಾಗಾಗಿ ನಾವಲ್ಲದಿದ್ದರು ನಮ್ಮ ಎದುರು ಇರುವವರು ಗಾದೆಗಳ ಮೂಲಕ
ನಮ್ಮನು ಜಾಗೃತಿ ಗೊಳಿಸುತ್ತಿರುತ್ತಾರೆ.
Kannada Gaadegalu - ಕನ್ನಡ ಗಾದೆಗಳು
- ಪಾಲಿಗೆ ಬಂದದ್ದು ಪಂಚಾಮೃತ.
- ಪಾಪಿ ಸಮುದ್ರಕ್ಕೆ ಹೋದ್ರು ಮೊಣಕಾಲು ಉದ್ದ ನೀರು.
- ಮಾಡಿದ ಪಾಪ ಆಡಿದೋರ ಬಾಯಲ್ಲಿ.
- ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ.
- ಬಂದದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ.
- ಬಡವ ನೀ ಮಡಗಿದ ಹಾಗಿರು.
- ಎಲ್ಲ ಜಾಣ ತುಸು ಕೋಣ.
- ನಮ್ಮ ದೇವರ ಸತ್ಯ ನಮಗೆ ಗೊತ್ತು.
- ಬಡವನ ಕೋಪ ದವಡೆಗೆ ಮೂಲ.
- ಉಗುರಲ್ಲಿ ಹೋಗೋದಕ್ಕೆ ಕೊಡಲಿ ಏಕೆ?.
- ಸುಖ ಬಂದಾಗ ಹಿಗ್ಗಬೇಡ ಕಷ್ಟ ಬಂದಾಗ ಕುಗ್ಗಬೇಡ.
- ಹಲ್ಲು ಇದ್ದವನಿಗೆ ಕಡ್ಲೆ ಇಲ್ಲ ಕಡ್ಲೆ ಇದ್ದವನಿಗೆ ಹಲ್ಲಿಲ್ಲ.
- ಹುಚ್ಚನ ಮದುವೇಲಿ ಉಂಡೋನೇ ಜಾಣ.
- ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು.
- ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು.
- ಕೈ ಕೆಸರಾದರೆ ಬಾಯಿ ಮೊಸರು.
- ಕುಣಿಯಕ್ಕೆ ಬಾರದವರಿಗೆ ನೆಲ ಡೊಂಕು.
- ಯುದ್ಧ ಕಾಲದಲ್ಲಿ ಶತ್ರಾಭ್ಯಾಸ.
- ಆನೆ ಇದ್ದರು ಸಾವಿರ ಸತ್ತರು ಸಾವಿರ.
- ಹಾಸಿಗೆ ಇದ್ದಷ್ಟು ಕಾಲು ಚಾಚು.
- ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?.
- ರೊಟ್ಟಿ ಜಾರಿ ತುಪ್ಪಗೆ ಬಿದ್ದಂಗೆ.
- ರವಿ ಕಾಣದ್ದು ಕವಿ ಕಂಡ.
- ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ.
- ಹಳೇ ಚಪ್ಪಲಿ ಹೊಸ ಹೆಂಡತಿ ಕಚ್ಹೊಲ್ಲ.
- ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ.
- ಮನಸಿದ್ದರೆ ಮಾರ್ಗವಿದೆ.
- ಜಟ್ಟಿ ಬಿದ್ರು ಮೀಸೆ ಮಣ್ಣಾಗಲಿಲ್ಲ.
- ತೊಟ್ಟಿಲು ತೂಗೋ ಕೈ ದೇಶವನ್ನೇ ಆಳಬಲ್ಲದು.
- ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.
- ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು.
- ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತ್ಯೇ.
- ಹಂಗಿನ ಅರಮನೆಗಿಂತ ಗುಡಿಸಲೇ ಮೇಲು.
- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು.
- ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು.
- ಬಳ್ಳಿಗೆ ಕಾಯಿ ಭಾರವೇ.
- ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
- ನಾಯಿಯನ್ನು ಹೊಡೆಯಲು ಬಣ್ಣದ ಕೋಲೆ.
- ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ.
- ಹಿಡಿದ ಕಾರ್ಯ ಕೈಗತ್ತಲ್ಲ ತಿಂದ ಅನ್ನ ಮೈಗೆ ಹತ್ತಲ್ಲ.
- ಯಾವ ದೇವರು ವರ ಕೊಟ್ರು ಗಂಡನಿಲ್ಲದೆ ಮಕ್ಕಳಾಗದು.
- ತಾ ಕಳ್ಳ ಪರರ ನಂಬಳು.
- ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡುದ್ರೆ ಜಗತ್ತಿಗೆ ಗೊತಾಗಲ್ವಾ.
- ದೊಡ್ಡವರು ಹೇಳಿದ ಹಾಗೆ ಮಾಡು , ಮಾಡಿದ ಹಾಗೆ ಮಾಡಬೇಡ.
- ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪಲಿಲ್ಲ.
- ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
- ಜ್ಞಾನಿ ಬಂದರೆ ಗೌರವಿಸು , ಹೀನ ಬಂದರೆ ತ್ಯೆಜಿಸು.
- ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆ ಇಲ್ಲ.
- ಎತ್ತಿಗೆ ಜ್ವರಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ.
- ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ.
- ಅತಿ ಆಸೆ ಗತಿಕೇಡು.
- ಶಂಖದಿಂದ ಬಂದ್ರೇನೇ ತೀರ್ಥ.
- ಮಾತು ಬೆಳ್ಳಿ ಮೌನ ಬಂಗಾರ.
- ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತು ಇರಬೇಡ.
- ಸಜ್ಜನರ ಸಂಘ ಹೆಜ್ಜೇನು ಸವಿದಂತೆ.
- ಓಡಿ ಹೋಗೋಳು ಮೊಸರಿಗೆ ಹೆಪ್ಪು ಹಾಕ್ತಳ.
- ಚರ್ಮ ಸುಕ್ಕಾದ್ರೆ ಮುಪ್ಪು , ಕರ್ಮ ಮುಕ್ಕಾದ್ರೆ ಮುಕ್ತಿ.
- ಒಲಿದರೆ ನಾರಿ ಮುನಿದರೆ ಮಾರಿ.
- ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೊಯ್ತು.
- ಬರಗಾಲದಲ್ಲಿ ಅಧಿಕ ಮಾಸ.
- ನಾಯಿನ ಕರ್ಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದ ಹಾಗಾಯ್ತು.
- ಆಕಳ ಹೊಟ್ಟೇಲಿ ಅಚ್ಚೇರು ಬಂಗಾರ.
- ತಾಯಿಯಂತೆ ಮಗಳು, ನೂಲಿನಂತೆ ಸೀರೆ.
- ಕತ್ತೆಗೇನು ಗೊತ್ತು ಕಸ್ತುರಿ ಪರಿಮಳ.
- ಕಳ್ಳನ ನಂಬಿದರು ಕುಳ್ಳರನ್ನ ನಂಬಬಾರದು.
- ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
- ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಎಳೆಯಿತು.
- ಮಾತು ಮನೆ ಕೆಡಿಸಿತು ತೂತು ಓಲೆ ಕೆಡಿಸಿತು.
- ವೇದ ಸುಳ್ಳಾದರು ಗಾದೆ ಸುಳ್ಳಾಗದು.
- ನಾಯಿ ಬಾಲ ಯಾವತ್ತಿದ್ರೂ ಡೊಂಕೆ.
- ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಅಳುವುದೇ ಲೇಸು.
- ಊರಿಗೆ ಬಂದೋಳು ನೀರಿಗೆ ಬರ್ದೇ ಇರ್ತಾಳ.
- ರಾತ್ರಿ ಕಂಡ ಬಾವಿಲಿ ಹಗಲು ಬಿದ್ದಂಗೆ.
- ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ.
- ಹೋದ್ಯ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಅಂದ ಹಾಗೆ.
- ಕಾಸಿದ್ರೆ ಕೈಲಾಸ.
- ದುಡ್ಡೇ ದೊಡ್ಡಪ್ಪ.
- ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ.
- ವಿದ್ಯೆಗೆ ವಿನಯವೇ ಭೂಷಣ.
- ತಾಯಿಗಿಂತ ಬಂದುವಿಲ್ಲ ಉಪ್ಪಿಗಿಂತ ರುಚಿ ಇಲ್ಲ.
- ಕೊಚ್ಚೆ ಮೇಲೆ ಕಲ್ಲು ಎಸೆದ ಹಾಗೆ.
- ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.
- ಯಾರದೋ ದುಡ್ಡು ಎಲಮ್ಮನ ಜಾತ್ರೆ.
- ಗಾಳಿ ಬಂದಾಗ ತೂರಿಕೋ.
- ಆಕಾಶ ನೋಡೋಕೆ ನೂಕು ನುಗ್ಗಲೇ.
- ಸಗಣಿ ಸ್ನೇಹಕ್ಕಿಂತ ಗಂಧದ ಜೊತೆ ಗುದ್ದಾಟ ಮೇಲು.
- ಅನುಕೂಲ ಸಿಂಧು, ಅಭಾವ ವೈರಾಗ್ಯ.
- ಕಾರ್ಯವಾಸಿ ಕತ್ತೆ ಕಾಲು ಹಿಡಿ.
- ಮನೇಲಿ ಇಲಿ ಬೀದಿಲಿ ಹುಲಿ.
- ಅಜ್ಜಿಗೆ ಅರಿವೇ ಚಿಂತೆ, ಮಗಳಿಗೆ ಗಂಡನ ಚಿಂತೆ.
- ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ.
- ಬೇಲೀನೇ ಎದ್ದು ಹೊಲ ಮೈದಂತೆ.
- ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
- ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
- ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ.
- ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ.
- ಕಪ್ಪೆನ ತಕ್ಕಡಿಗೆ ಹಾಕಿದ ಹಾಗೆ.
- ಮೂಗಿಗಿಂತ ಮುಗುತ್ತಿ ಭಾರ.
- ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿದಂತೆ.
- ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯು ಆಸರೆ.
ವ್ಯಕ್ತಿಯ ನಡವಳಿಕೆಯಲ್ಲಿ ದೃಢೀಕರಣ, ಸಮಗ್ರತೆ ಮತ್ತು ಸ್ಥಿರತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಈ ಗಾದೆಯನ್ನು
ಹೆಚ್ಚಾಗಿ ಬಳಸಲಾಗುತ್ತದೆ.
ಇದು ನಮ್ಮ ಕ್ರಿಯೆಗಳ ಬಗ್ಗೆ ಎಚ್ಚರವಾಗಿರಲು ಮತ್ತು ಇತರರನ್ನು ಅವರ ಮಾತುಗಳಿಗಿಂತ ಅವರ ಕಾರ್ಯಗಳ ಆಧಾರದ ಮೇಲೆ
ಮೌಲ್ಯಮಾಪನ ಮಾಡಲು ಪ್ರೋತ್ಸಾಹಿಸುತ್ತದೆ.
ಮೂಲಭೂತವಾಗಿ, ಕ್ರಿಯೆಗಳು ಕೇವಲ ಭಾಷಣಕ್ಕಿಂತ ಪಾತ್ರ ಮತ್ತು ಉದ್ದೇಶಗಳ ಹೆಚ್ಚು ವಿಶ್ವಾಸಾರ್ಹ ಸೂಚಕವಾಗಿದೆ ಎಂದು
ನಮಗೆ ನೆನಪಿಸುತ್ತದೆ.